‘ಮಧ್ಯಪ್ರದೇಶದ ಬ್ಯಾವರಾ ವಿಧಾನಸಭಾ ಕ್ಷೇತ್ರಕ್ಕೆ ಪ್ರಜ್ಞಾ ಸಿಂಗ್ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕ ಗೋವರ್ಧನ್ ದಾಂಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಟೀಕೆಗಳು ವ್ಯಕ್ತವಾದ ಬಳಿಕ ಶಾಸಕ ದಾಂಗಿ, ವಿಷಾದ ವ್ಯಕ್ತಪಡಿಸಿ ಗಾಂಧೀಜಿಯ ಅಹಿಂಸಾ ತತ್ವ ಪಾಲಿಸುವುದಾಗಿ ಹೇಳಿದ್ದರು.